ಧವನ್ ಅವರು ಹೇಳಿದಂತೆ, ಯುವ ಜನರು ಸಂಬಂಧಗಳಲ್ಲಿ ಆತುರಪಡಬಾರದು. ಅನೇಕ ಸಂದರ್ಭಗಳಲ್ಲಿ ಯುವಕರು ಆತುರದಲ್ಲಿ ಭಾವನಾತ್ಮಕ ನಿರ್ಣಯಗಳನ್ನು ತೆಗೆದುಕೊಂಡು ಮದುವೆಯಾಗುತ್ತಾರೆ.
ಆರಂಭಿಕ ಬ್ಯಾಟ್ಸ್ಮನ್ ತಮ್ಮ ವಿಚ್ಛೇದನ ಪ್ರಕರಣ ಇನ್ನೂ ಬಗೆಹರಿದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಅವರು 'ಮರುಮದುವೆ'ಯ ವಿಷಯವನ್ನು ನಿರಾಕರಿಸಲಿಲ್ಲ, ಆದರೆ ಈಗ ಅದರ ಬಗ್ಗೆ ಯೋಚಿಸುತ್ತಿಲ್ಲ ಎಂದಿದ್ದಾರೆ.
ಶಿಖರ್ ಮತ್ತು ಆಯಿಷಾ ಅವರ ಪ್ರೇಮಕಥೆಯು ಸಾಮಾಜಿಕ ಜಾಲತಾಣದಿಂದ ಆರಂಭವಾಯಿತು. ಸಾಮಾಜಿಕ ಜಾಲತಾಣದಲ್ಲಿ ಆಯಿಷಾರ ಫೋಟೋ ನೋಡಿ ಶಿಖರ್ ತ್ಕ್ಷಣವೇ ಮೋಹಿತರಾದರು. ಆಯಿಷಾ ವಿಚ್ಛೇದಿತೆಯಾಗಿದ್ದು, ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಮೊದಲ ಮದುವೆಯ ತಪ್ಪುಗಳನ್ನು ಎರಡನೇ ಮದುವೆಯಲ್ಲಿ ಪುನರಾವರ್ತಿಸುವುದಿಲ್ಲ ಎಂದು ಹೇಳಿದರು.