ಅನೇಕ ಪ್ರತಿಭಟನಾಕಾರರು ಪಂಜಾಬಿನಲ್ಲಿರುವ ತಮ್ಮ ಕುಟುಂಬ ಮತ್ತು ಸ್ನೇಹಿತರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ರವಿವಾರ ಖಾಲಿಸ್ತಾನಿಗಳು ಇಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಅವಾಂತರ ಸೃಷ್ಟಿಸಿ, ತ್ರಿವರ್ಣ ಧ್ವಜವನ್ನು ಕೆಳಗೆ ಇಳಿಸಿದ್ದರು. ಭಾರತವು ರವಿವಾರದ ಘಟನೆಯನ್ನು ತೀವ್ರವಾಗಿ ಖಂಡಿಸಿತ್ತು.
ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ನ ಸಿಬ್ಬಂದಿ ಮೇಲಿನ ದಾಳಿಗಳನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದು ಬ್ರಿಟನ್ನ ವಿದೇಶ ಸಚಿವ ಜೇಮ್ಸ್ ಕ್ಲೆವರ್ಲಿ ಹೇಳಿದ್ದಾರೆ.
ಖಾಲಿಸ್ತಾನಿ ಬೆಂಬಲಿಗರಿಗೆ ಪ್ರತಿಕ್ರಿಯೆ; ಲಂಡನ್ ಪೊಲೀಸರು ತಡೆದಾಗ ಪ್ರತಿಭಟನಾಕಾರರು ಶಾಯಿ-ಮೊಟ್ಟೆಗಳನ್ನು ಎಸೆದರು